ಅವಳಾಣತಿಯಂತೆ ನಾ ಇಂದು
ನಾ ಅವಳಾಗಿ ಹೇಳಬಯಸುವೆ
ಮನನೊಂದು ಗೆಳತಿ .... .. :-)
ಕನಸುಗಳ ಕೈ ಜಾರಿಸಿ, ಕಂಕಣಕೆ
ಕೈ ಸೇರಿಸಿ, ಹೆತ್ತವರ ಆಣತಿಯಂತೆ
ಶ್ರೀಮತಿಯ ಪಟ್ಟ ಅಲಂಕರಿಸಿದೆ ನಾ
ಮನ್ಸಸೋತ ಮನ ಬಿಗಿಹಿಡಿದು
ಹೃದಯ, ಮದುವೆ ಮಂಟಪದಲ್ಲಿ
ಬಂದು ಹರಸಿತು ನನ್ನ ಅಂದು.
ಅವರ ದೌರ್ಜನ್ಯಕ್ಕೆ ಸಿಲುಕಿ
ಮನೆ-ಮಾನಗಳಿಗೆ ತಲೆಬಾಗಿ
ಅರಮನೆಯ ಬಂದಿ ಆಗಿರುವೆ ನಾ
ಅರಿಸಿನದ ಗುಂಗು, ಮದರಂಗಿಯ
ರಂಗು ಆರುವ ಮುನ್ನವೇ
ಲಬಿಸಿದೆ ಏಕಾಂಗಿತನ,
ಬಿಂಕದ ಕನಸುಗಳು ಕಣ್ಣು ಸೀಳುತಿವೆ ನಿದಿರೆ ಇಲ್ಲ,
ಹೊರಡ ಬೇಕೆನಿಸಿದೆ ಈಗ ಯಾರು ಇಲ್ಲದೂರಿಗೆ,
ಯಾರು ಹಿಂಬಾಲಿಸಲಾಗದ ದಾರಿಯಲಿ.
-ನಗೆಮಲ್ಲಿಗೆ
ಹೊರಡ ಬೇಕೆನಿಸಿದೆ ಈಗ ಯಾರು ಇಲ್ಲದೂರಿಗೆ - ಸಾಗುವಾಸೆಯೂ ನನಗೂ.
ReplyDeleteNice one... :)
ReplyDeleteDhanyavaadagalu Badari sir and Pradeep avare
ReplyDelete