ಕಾಸಗಲದ ಚಿನ್ನಕೆ
ಇಲ್ಲದಾಯಿತು
ಬೆಸುಗೆಯ
ಬಂಧಿಸುವ ಯೋಗ
ಕರಿಮಣಿಗೂ
ಸಿಗದೇ ಹೋಯಿತು
ಕೊರಳಿಗೇರುವ
ಅವಕಾಶ
ಚಪ್ಪರ, ಬಾಳೆ-ಮಾವು,
ಅರಿಸಿನ, ಮಂಟಪ'
ವಾದ್ಯಗಳಿಗು ದೊರಕದೇ
ಹೋಯಿತು ಅದೃಷ್ಟ
ಹಾರಕ್ಕು ಮಣಿಯಲಿಲ್ಲ
ಹರೆಯದ ಶಿರ,
ಉಂಗುರಗಳಿಗಂತೂ
ಜಾಗವೇ ಅಲ್ಲಿರಲಿಲ್ಲ
ಕಾಲನು ಮಾತ್ರ ಬಿಡಲಿಲ್ಲ
ಸೇರಿಸಿಯೇ ಬಿಟ್ಟ
ಹೆಸರಿಡದೆ
ಹೊರಟ
ಪಶ್ಚಾತಾಪದ
ಕೋಣೆಯಲ್ಲಿ
ಬಂದಿಯನ್ನಾಗಿಸಿ
ಅವಳ
-ನಗೆಮಲ್ಲಿಗೆ
ಯಾಕೋ ಮನಸು ಮ್ಲಾನವಾಯಿತು.
ReplyDeleteDadari sir nimma protsahakke naanu chiraruni :)
ReplyDelete