Thursday 23 January 2014

ಬರೆಯುತ್ತೇನೆ ನಾನು

http://www.panjumagazine.com/?p=5985 

ಪಂಜುವಿನಲ್ಲಿ ಪ್ರಕಟ ಆದ ಒಂದು ಕವನ 

ಹೆತ್ತವರ ಕಂಬನಿಯ
ನೋವನು ಕುರಿತು
ಅತ್ಮಸಾಕ್ಷಿ ಇಲ್ಲದವರ ಮೇಲೆ
ಮಣ್ಣಿಗಾಗಿ ಬಡಿದಾಡುವ
ಬಂಧುಗಳ ಕುರಿತು
ಬರೆಯುತ್ತೇನೆ ನಾನು
ಸನ್ಯಾಸತ್ವ ಪಡೆದವರ ಮೇಲೆ
ವ್ಯಾಮೋಹ ಬಿದಡಿರುವುದನು ಕುರಿತು
ಅವರಲ್ಲಿರುವ ಕ್ರೋದ
ನಯವಂಚನೆಯ ಕುರಿತು 
ಬರೆಯುತ್ತೇನೆ ನಾನು
ಆತ್ಮನಾನು ಪರಮಾತ್ಮತಂದೆ
ಅನ್ನುವವರ ಮೇಲೆ
ತನ್ನದಲ್ಲದನ್ನು ತನ್ನದೆಂದು
ವಾದಿಸುವವರ ಕುರಿತು
ಮಣ್ಣಾಗುವಾಗ ಬಿಡಿಗಾಸಿರದೆ
ಬರಿಗೈಯಲ್ಲಿ ಹೋಗುವ
ಪ್ರತಿಯೊಬ್ಬರ ಎಣಿಸಿ
-ನಗೆಮಲ್ಲಿಗೆ 

No comments:

Post a Comment