ಕಾರಣಗಳೇ ಉಳಿದಿಲ್ಲ ಗೆಳೆಯ
ನನಲ್ಲಿ ಹಿಡಿದಿಡಲು ನಿನ್ನನು
ಮುತ್ತುಗವೆಂದೂ ಮಲ್ಲಿಗೆಯಾಗಿ
ಮುಡಿ ಏರಲಾರದು,
ಕಾಳ್ಗಿಚ್ಚು ಆಗಲಾರದು
ಕಾನನದ ದಾರಿದೀಪ,
ಕಡಲಿಗೂ ಉಂಟು ಎರಡು ತೀರ
ಅವು ಎಂದೂ ಸೇರಲಾರವು ಹತ್ತಿರ
ಮೌನಕ್ಕ
ಶರಣಾದೆ
ನಿಜ!
ಅದರೂ
ತೀರದ ಹಂಬಲ
ಮನಸಲ್ಲಿ
ನಿನ್ನೊಡನೆ
ಮತ್ತೆ ಮತ್ತೆ
ಮಾತನಾಡಲು!!
********************
ಹೊತ್ತಾದರೇನು
ನಿನ್ನ ಮುತ್ತಿಗೆ
ಬಡಿವ ಹೃದಯಕದು
ಸಿಕ್ಕೋ ಪ್ರೀತಿಯ
ಕೈ ತುತ್ತು ಅಲ್ಲವೇ !!
-ನಗೆ ಮಲ್ಲಿಗೆ
No comments:
Post a Comment