ಹುಣ್ಣಿಮೆಯಂದು
ಚಂದ್ರ ಬಂದಿಹನು
ಬಿಂಕದ ಬೆಳಕ
ಸೂಸುತಿಹನು
ತಿಂಗಳಾಯಿತು
ಬೋಳು ಹಣೆಗೆ
ಅವರಿಟ್ಟ ಬೊಟ್ಟಿಲ್ಲ
ತೊಡಿಸಿದ
ಕಾಲುಂಗುರದ ಹೊಳಪಿಲ್ಲ
ಮಲ್ಲಿಗೆ ಮುಡಿಯಲಿಲ್ಲ,
ಕೈಬಳೆಯ ಸದ್ದಿಲ್ಲ,
ಕರಿಮಣಿಯ ಗಂಟ್ಟಿಲ್ಲ
ಇವನಿಗೂ ತಿಳಿದು
ಹೋಯಿತಲ್ಲ
ನಾನಾದೆ ವಿಧವೆ.....
ನಡೆಸುತಿಹೆ
ಸಂಸಾರ ಸುಧೆ
ಅವರು ಬಿಟ್ಟು ಹೋದ
ನೆನಪುಗಳ ಒಟ್ಟಿಗೆ
ಮಾಡಿಕೊಂಡು
ಮಾಲೀಕನಿಲ್ಲದ
ಮದುವೆ
-ನಗೆ ಮಲ್ಲಿಗೆ
ಯಾಕೋ ಮನಸ್ಸು ವಿಹ್ವಲವಾಯಿತು. ಅಪ್ಪ ತೀರಿಕೊಂಡಾಗ ಅಮ್ಮನ ಚಿತ್ರಣ ಕಣ್ಮುಂದೆ ಬಂದಿತು :(
ReplyDeleteSuper meaning ful kavana Anupama Madam. Thnx...
ReplyDeleteಮನ ಮುಟ್ಟಿತು ಈ ಭಾವ ಬರಹ :(
ReplyDeleteವಿಧಿಯ ಆಟ
Thank you very much Bhabya Bhat , Vasanth and Badari sir
ReplyDeleteDhanyavaadagalu
Thank you very much Bhabya Bhat , Vasanth and Badari sir
ReplyDeleteDhanyavaadagalu