ಕಾರಣವಿಲ್ಲದೆ ಬಂದು ಕಾಡೋ
ಒಂದಷ್ಟು ಪ್ರಶ್ನೆಗಳು ಯಾಕೋ
ಯಾರನ್ನೋ ಕಳಕೊಂಡ ಭಾವ ?
ಆ ಯಾರು? ಯಾಕಾಗಿ ಕಾಡುತಿದೆ?
ಸಂಬಂಧ, ಸ್ನೇಹ, ಪ್ರೀತಿ, ವಾತ್ಸಲ್ಯ
ವ್ಯಾಮೋಹ ಹೆಸರಿಲ್ಲದ ಅನುಬಂಧವೇ ಅದು?
ಸಂತೆಯಲ್ಲಿ ಇಟ್ಟವರು ಯಾರು ಚಿಂತೆಯ ಅಂಗಡಿಯ?
ಕೂಗಿ ಮಾರುವರು ಯಾರು ಕಂತೆ ಕಂತೆಯ?
ಹೇಗೆ ಹೊರಡಲಿ ಹೊತ್ತು ಗೊಂದಲಗಳ ಗಂಟು ಮೂಟೆಯ?
ಪ್ರಶ್ನೆಯ ಮಣಿ ಬಿಡಿಬಿಡಿಯಾಗಿ ಬೀಳುತಿವೆ
ಮನದೊಳಗೆ, ಉತ್ತರದ ಮಾಲೆಯ
ಪೂಣಿಸಬೇಕಾಗಿದೆ ಕಾಲವೇ ಕೊನೆಗೆ
ಕೂಗಿ ಮಾರುವರು ಯಾರು ಕಂತೆ ಕಂತೆಯ?
ಹೇಗೆ ಹೊರಡಲಿ ಹೊತ್ತು ಗೊಂದಲಗಳ ಗಂಟು ಮೂಟೆಯ?
ಪ್ರಶ್ನೆಯ ಮಣಿ ಬಿಡಿಬಿಡಿಯಾಗಿ ಬೀಳುತಿವೆ
ಮನದೊಳಗೆ, ಉತ್ತರದ ಮಾಲೆಯ
ಪೂಣಿಸಬೇಕಾಗಿದೆ ಕಾಲವೇ ಕೊನೆಗೆ
- ನಗೆ ಮಲ್ಲಿಗೆ
ಕಾಲ ಬರುತ್ತದೆ ಆದರೆ ನಾನಲ್ಲ, ಎನ್ನುವ ಭಾವ ನಮ್ಮೊಳಗಿನ ವಿಚಾರವಂತಿಕೆಯ ಸೂಚನೆ. ಎಲ್ಲವನ್ನೂ ಪ್ರಶ್ನಿಸುವ ಪರೀಕ್ಷಿಸುವ ಮನಸ್ಸು ಹರುಷಗೊಳಲ್ಲಿ ಸದಾ ಕಾಲವೂ.
ReplyDeleteಶಿವರಾಮಕಾರಂತರ "ಮೂಕಜ್ಜಿಯ ಕನಸುಗಳು" ಓದಿ ಹುಟ್ಟಿದ ಸಾಲುಗಳು
ReplyDeleteಧನ್ಯವಾದಗಳು ಬದರಿ ಸರ್
ಶಿವರಾಮಕಾರಂತರ "ಮೂಕಜ್ಜಿಯ ಕನಸುಗಳು" ಓದಿ ಹುಟ್ಟಿದ ಸಾಲುಗಳು
ReplyDeleteಧನ್ಯವಾದಗಳು ಬದರಿ ಸರ್