ಬದುಕಿಗೆ ಬೇಸರವಾಯಿತಾ
ನಯವಂಚಕರ ಮಧ್ಯೆ
ಸುಮ್ಮನೆ ಕುಳಿತು ....?
ಪ್ರತೀ ಹುಟ್ಟಿಗೂ ಸಾವು ನಿಶ್ಚಯ
ಹೀಗಿದ್ದೂ ನಾನುನಾನೆಂಬ
ತರತಮಗಳು ಬೇಕಾ...?
ಆಸೆ-ಕನಸುಗಳ ಜೇನುಗೂಡ ಅಮಲಲ್ಲಿ
ದ್ವೇಷ ಅಸೂಯೆಗಳ ಮಡಿಲಲ್ಲಿಟ್ಟುಕೊಂಡೆ
ಮಸಲತ್ತು ಹೂಡುವುದು ಏಕೆ...?
ನೇಸರನಿಗೆ ಮುಜುಗರವೇ
ಬೆಳಕ ಚೆಲ್ಲದೇ ಮೋಡದ ಮರೆಯಲ್ಲಿ
ಅವಿತಂತಿಹನಲ್ಲ...?
ದುರುಳರ ಜಗವ ತೊರೆಯಲೋ
ಅಮಾವಾಸ್ಯೆಯ ನೆಪವೊಡ್ಡಿ
ಅಡಗಿ ಕೊಂಡನೇ ..?
ಕಳಸವಿಲ್ಲ ಮನದ ಗೋಪುರ ಕಳಗುಂದಿದೆ
ಕಳೆದೋಗಿವೆ ತೆತ್ರಾ , ದ್ವಾಪರ ಕಾಲಗಳು
ಈಗೇನಿದ್ದರೂ ಕಲಿಯುಗದ ಕಲಿಗಳ ಸಮರ
ಜಟಿಲ ಕುಟೀರ ಬದುಕಯಾನ
ಕೀಳರಿಮೆಯ ಕಣದಲ್ಲಿ ಅದಕೋ ನೇಸರನಿಲ್ಲದ ಬೇಸರ
ಕೈಮೀರಿ ನಡೆಯುತಿದೆ ಕಾಲನ ಉಪಚಾರ ....!?!
ಸುಮ್ಮನೆ ಕುಳಿತು ....?
ಪ್ರತೀ ಹುಟ್ಟಿಗೂ ಸಾವು ನಿಶ್ಚಯ
ಹೀಗಿದ್ದೂ ನಾನುನಾನೆಂಬ
ತರತಮಗಳು ಬೇಕಾ...?
ಆಸೆ-ಕನಸುಗಳ ಜೇನುಗೂಡ ಅಮಲಲ್ಲಿ
ದ್ವೇಷ ಅಸೂಯೆಗಳ ಮಡಿಲಲ್ಲಿಟ್ಟುಕೊಂಡೆ
ಮಸಲತ್ತು ಹೂಡುವುದು ಏಕೆ...?
ನೇಸರನಿಗೆ ಮುಜುಗರವೇ
ಬೆಳಕ ಚೆಲ್ಲದೇ ಮೋಡದ ಮರೆಯಲ್ಲಿ
ಅವಿತಂತಿಹನಲ್ಲ...?
ದುರುಳರ ಜಗವ ತೊರೆಯಲೋ
ಅಮಾವಾಸ್ಯೆಯ ನೆಪವೊಡ್ಡಿ
ಅಡಗಿ ಕೊಂಡನೇ ..?
ಕಳಸವಿಲ್ಲ ಮನದ ಗೋಪುರ ಕಳಗುಂದಿದೆ
ಕಳೆದೋಗಿವೆ ತೆತ್ರಾ , ದ್ವಾಪರ ಕಾಲಗಳು
ಈಗೇನಿದ್ದರೂ ಕಲಿಯುಗದ ಕಲಿಗಳ ಸಮರ
ಜಟಿಲ ಕುಟೀರ ಬದುಕಯಾನ
ಕೀಳರಿಮೆಯ ಕಣದಲ್ಲಿ ಅದಕೋ ನೇಸರನಿಲ್ಲದ ಬೇಸರ
ಕೈಮೀರಿ ನಡೆಯುತಿದೆ ಕಾಲನ ಉಪಚಾರ ....!?!
...............
ತೆತ್ರಾ..ತೇತ್ರಾ
ಆಗಲಿ
-Anupama S Gowda
Alakere (Mandya)
yake baduku besaravagide anu
ReplyDeleteyake baduku besaravagide anu
ReplyDelete