Thursday 23 August 2012

ಬದುಕಿಗೆ ಬೇಸರವಾಯಿತಾ


ಬದುಕಿಗೆ ಬೇಸರವಾಯಿತಾ
ನಯವಂಚಕರ ಮಧ್ಯೆ
ಸುಮ್ಮನೆ ಕುಳಿತು ....?

ಪ್ರತೀ ಹುಟ್ಟಿಗೂ ಸಾವು ನಿಶ್ಚಯ
ಹೀಗಿದ್ದೂ ನಾನುನಾನೆಂಬ
ತರತಮಗಳು ಬೇಕಾ...?

ಆಸೆ-ಕನಸುಗಳ ಜೇನುಗೂಡ ಅಮಲಲ್ಲಿ
ದ್ವೇಷ ಅಸೂಯೆಗಳ ಮಡಿಲಲ್ಲಿಟ್ಟುಕೊಂಡೆ
ಮಸಲತ್ತು ಹೂಡುವುದು ಏಕೆ...?

ನೇಸರನಿಗೆ ಮುಜುಗರವೇ
ಬೆಳಕ ಚೆಲ್ಲದೇ ಮೋಡದ ಮರೆಯಲ್ಲಿ
ಅವಿತಂತಿಹನಲ್ಲ...?

ದುರುಳರ ಜಗವ ತೊರೆಯಲೋ
ಅಮಾವಾಸ್ಯೆಯ ನೆಪವೊಡ್ಡಿ
ಅಡಗಿ ಕೊಂಡನೇ ..?

ಕಳಸವಿಲ್ಲ ಮನದ ಗೋಪುರ ಕಳಗುಂದಿದೆ
ಕಳೆದೋಗಿವೆ ತೆತ್ರಾ , ದ್ವಾಪರ ಕಾಲಗಳು
ಈಗೇನಿದ್ದರೂ ಕಲಿಯುಗದ ಕಲಿಗಳ ಸಮರ

ಜಟಿಲ ಕುಟೀರ ಬದುಕಯಾನ
ಕೀಳರಿಮೆಯ ಕಣದಲ್ಲಿ ಅದಕೋ ನೇಸರನಿಲ್ಲದ ಬೇಸರ
ಕೈಮೀರಿ ನಡೆಯುತಿದೆ ಕಾಲನ ಉಪಚಾರ ....!?!
...............
ತೆತ್ರಾ..ತೇತ್ರಾ
ಆಗಲಿ


-Anupama S Gowda 
 Alakere (Mandya)

2 comments: