**********************
ಅನಿರೀಕ್ಷಿತ ಆಮಂತ್ರಣ ಕೊಟ್ಟು
ನೀ ಬರುವಕಡೆ ನನ್ನ ಗಮನ ನೆಟ್ಟೆ
ರಾತ್ರಿ ಕನಸ ಹೊನಲಲ್ಲಿ
ಬೆಳ್ಳಿ ಚಂದಿರನ ಮುಡಿಗಿಟ್ಟೆ
ಕಣ್ಣು ತೆರೆದ ಮೇಲೆ ಕರೆ ಇತ್ತು
ಅನಿವಾರ್ಯತೆಯ ಕಾರಣಕೊಟ್ಟು
ಆಮಂತ್ರಣ ಆಕಸ್ಮಿಕವೆಂದು ಹೇಳಿದೆ ...?
ನಿಷ್ಕಲ್ಮಶ ಕಣ್ಣುಗಳಲ್ಲಿ ತುಂಬಿ
ಬಟಾಡುವ (ತುಂಬಿರುವ) ನೀರನ್ನು ಹೊರಗೆ
ಹರಿಬಿಡಲೂ ಆಗದೆ, ಒಳಗೆ
ಒಳಗೆ ಹುದುಗಿಡಲು ಆಗದೆ.......ಒಮ್ಮೆ
ಮೇಲೆ ಮುಖ ಮಾಡಿ ಆಕಾಶದಚೆ
ಎಲ್ಲೋ ಇರುವ ದೇವರನ್ನು ಕ್ಷಣ ಮಾತ್ರ
ನಿಂಧಿಸಿ ಮತ್ತೆ ನನ್ನನು ನಾನೇ ಸಂತೈಸಿಕೊಂಡು
ಮುಂದೆ ಸಾಗಿದೆ ಯಾನ ಏಕಾಂತದೂರಿನ ಪಯಣ
ಅನುಪಮ.ಎಸ್ ಗೌಡ
ಆಲಕೆರೆ
No comments:
Post a Comment