******************************
ಸಾವಿನ ಮನೆಯಲಿ ನಿಂತು ಜೀವದ ಭಿಕ್ಷೆ ಕೇಳಲ?
ಇಲ್ಲ ಮುಳ್ಳು ಮೆತ್ತಿದ ಜೀವನದಲ್ಲಿ ಸುಪ್ಪತ್ತಿನ ಹಾಸಿಗೆ ಕೇಳಲ?
ಚಾಪೆ ಇಲ್ಲದೆ ಕಳೆದ ಎಸ್ಟೋ ರಾತ್ರಿಗಳು
ಗುಡಿಸಲ ಒಳಗಡೆ ನಿಂತು ಛತ್ರಿ ಹಿಡಿದ ಮಳೆಗಾಲಗಳು
ಹೊಗೆಯಲಿ ಹತ್ತಾರು ವರ್ಷ ಬೆಂದ ಕಣ್ಣುಗಳು
ಬೆಳಕಿಲ್ಲದ ಓದುಗಳು....ಇದೆಲ್ಲದಕ್ಕೂ ಸುಂಕ ಕಟ್ಟಿ ಸೋತ ಬಾಲ್ಯ
ಕಳೆದ ದಿನಗಳ ಮರ್ಮದ ಬಗ್ಗೆ ಕೇಳಲ
ಉಳಿದದಿನಗಳ ಕರ್ಮದ ಬಗ್ಗೆ ಕೇಳಲ ಕಾಣದ ಕಲ್ಲು ನೀನು ....
ಉಂಡ ನಿನಗೆ ಹಸಿದ ನಾನು ಏನ್ ಕೇಳಲಿ
ಗುಡಿಸಲ ಗುಲಾಬಿ ನಾನು ಗುಡಿಲಿರೋ ದೇವರು ನೀನು.
***************ಅನುಪಮ s ಗೌಡ ಆಲಕೆರೆ**************
ಮಾತುಗಳಿಲ್ಲ...
ReplyDeleteಮನವ ತಾಕಿತೆಂದಷ್ಟೇ ಹೇಳಬಲ್ಲೆ...