Sunday 2 September 2012

ಪ್ರತೀಕ್ಷೆ




*******
ನಿನ್ನ ಹುಟ್ಟುಗುಣ
ಉಪ್ಪಿನದಾದರೂ
ಸಿಹಿಯಾದೀತೆಂಬ
ಭರವಸೆಯಲ್ಲಿ
ಮುಪ್ಪಿನವರೆಗೂ ಕಾದೆ
ಕಾಯುತ್ತಾ ಕುಳಿತಲ್ಲೇ
ನಿನ್ನ ನೆನಪುಗಳನ್ನು ಹೆಕ್ಕಿ
ಮನಸ ಮಾಳಿಗೆಯ 
ಮೂಲೆ ಮೂಲೆಯಲ್ಲೂ  
ಬಿಡಿಯಾಗಿ ಎಣಿಸಿ 
ಜೋಡಿಸಿ ದಾಖಲಿಸುತ್ತಾಹೋದೆ
ಕೊನೆಗೂ ಲವಣ ಸಿಹಿಯಾಗಲಿಲ್ಲ
ಬದುಕು ಸವಿಯಾಗಲಿಲ್ಲ
.
- ಅನುಪಮ ಎಸ್ ಗೌಡ

No comments:

Post a Comment