*********************
ರಾತ್ರಿಗಳೆಲ್ಲ ಕೆಂಡದ ಮೇಲೆ
ಹಗಲುಗಳೆಲ್ಲ ಬೆಂಕಿಯ ಒಳಗೆ
ಹೊರಳಿದರು ಸುಡದೆ ನಗುವ
ದೇಹ .....ಇಂದು ಏಕೋ
ತಣ್ಣನೆ ಒಳಗೆ ಸುರಿಯುವ
ನಿನ್ನ ನೆನಪುಗಳ ಮಳೆಗೆ
ನೋಯುತ ಚೀರಿ ಚೀರಿ
ಅಳುತಿದೆಯಲ್ಲ ಹೃದಯ
ಬೇಡದ ಆಸೆ ಕಾಡುವುದಲ್ಲ
ಶಾಂತ ಮನವ ಕೆದಕುವುದಲ್ಲ
ಏನಿದರ ಮರ್ಮ ತಿಳಿಯೆ !!!!!!
ನೋವಾದರೂ ಹಿತವಾಗಿದೆ
ಸಾಕಾದರೂ ಬೇಕಾಗಿದೆ
ಸುಖವಾದ ನೋವಿಗೆ
ಶರಣು ಶರಣು!!~!!!
-ಅನುಪಮ ಎಸ್ ಗೌಡ
ಆಲಕೆರೆ
No comments:
Post a Comment