ಇಂದಿನ ಪಂಜುವಿನಲ್ಲಿ (ಅಂತರ್ಜಾಲ ಪತ್ರಿಕೆ ) ಪ್ರಕಟವಾದ ನನ್ನ ಒಂದು ಕವನ , ಧನ್ಯವಾದಗಳು ಪಂಜು ಬಳಗಕ್ಕೆ
೧. ಕೊಳಕ್ಕೆ
ಎಸೆದ ಕಲ್ಲುಗಳು
ಈಜುತಿದ್ದ ಚಂದಿರನ
ಏಕಾಂತವನ್ನು
ಭಗ್ನಗೊಳಿಸಿದೆ
ಎಸೆದ ಕಲ್ಲುಗಳು
ಈಜುತಿದ್ದ ಚಂದಿರನ
ಏಕಾಂತವನ್ನು
ಭಗ್ನಗೊಳಿಸಿದೆ
೨. ಒಡೆದ ಕನ್ನಡಿ;
ಬೇಲಿ ಅಂಚಲ್ಲಿ
ಚಂದಿರ ಚೂರಾಗಿ
ಬಿದ್ದಿಹನು
೩. ರಾತ್ರಿ ಬೆನ್ನ ಹಿಂದೆ
ಬಿದ್ದ ಚಂದಿರ
ಅಪ್ಪನ ಕರೆದ ತಕ್ಷಣ
ಬೆಟ್ಟದ ಹಿಂದೆ
ಅಡಗಿ ಕುಳಿತ
ಬಿದ್ದ ಚಂದಿರ
ಅಪ್ಪನ ಕರೆದ ತಕ್ಷಣ
ಬೆಟ್ಟದ ಹಿಂದೆ
ಅಡಗಿ ಕುಳಿತ
೪. ಕೊಡಕ್ಕೆ ಹಗ್ಗ ಕಟ್ಟಿ
ಕೆಳಗಿಳಿಸಿ,
ಮೇಲೆತ್ತಬೇಕು;
ಬಾವಿಗೆ ಬಿದ್ದ
ಚಂದಿರನ
ಬದುಕಿಸಲು.
ಕೆಳಗಿಳಿಸಿ,
ಮೇಲೆತ್ತಬೇಕು;
ಬಾವಿಗೆ ಬಿದ್ದ
ಚಂದಿರನ
ಬದುಕಿಸಲು.
೫. ಚಳಿಯ ಹೊಡೆತಕ್ಕೆ
ಚಂದ್ರನು ಮೋಡದ
ಹೊದಿಕೆಯಲಿ
ಅವಿತು ಕುಳಿತಿದ್ದಾನೆ
ಚಂದ್ರನು ಮೋಡದ
ಹೊದಿಕೆಯಲಿ
ಅವಿತು ಕುಳಿತಿದ್ದಾನೆ
೬. ಹಸಿದ ಹೊಟ್ಟೆ ಈಗ
ಚಂದ್ರನನ್ನೇ
ಮುರಿದು ತಿನ್ನು
ಎನ್ನುತಿದೆ
ಚಂದ್ರನನ್ನೇ
ಮುರಿದು ತಿನ್ನು
ಎನ್ನುತಿದೆ
೭. ಅಂದಕ್ಕೆ ಸೋತು
ಮೀನುಗಳು ಬಿಡದೆ
ಮುತ್ತಿಡುತಿವೆ
ಚಂದಿರ ಬಿಂಬಕ್ಕೆ
ಮೀನುಗಳು ಬಿಡದೆ
ಮುತ್ತಿಡುತಿವೆ
ಚಂದಿರ ಬಿಂಬಕ್ಕೆ
-ನಗೆಮಲ್ಲಿಗೆ
No comments:
Post a Comment